|| हरि: सर्वोत्तम वायु: जीवोत्तम ||

ಪರಮ ಪೂಜ್ಯ ಪುತ್ತಿಗೆ ಶ್ರೀಪಾದರಿಂದ ವಸಂತ ಬೇಸಿಗೆ ಶಿಬಿರ ಉದ್ಘಾಟನೆ

ಉಡುಪಿಯ ಪ್ರಸಿದ್ಧ ಗೀತಾ ಮಂದಿರದಲ್ಲಿ ಶ್ರೀ ರಮೇಶ್ ಭಟ್,ಶ್ರೀ ಮಹಿತೋಷ್ ಆಚಾರ್ಯ ಮತ್ತು ಶ್ರೀ ವಿಷ್ಣು ಮೂರ್ತಿಯ ಉಪಾಧ್ಯಾಯ ಇವರ ಸಂಘಟನೆಯಲ್ಲಿ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರಿಂದ ವಸಂತ ಬೇಸಿಗೆ ಶಿಬಿರ ಉದ್ಘಾಟನೆ ಇಂದು ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿ ಪರ್ವಕಾಲದಲ್ಲಿ ನಡೆಯಿತು,
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಂಧ್ಯಾವಂದನೆ,ದೇವಾ ಪೂಜಾ ಪದ್ಧತಿ.ಸೂಕ್ತಗಳು,ಪವಮಾನ ಪಾಠ,ಹಾಗೂ ಯಜನೋಪವೀತ ಧಾರಣೆ ರಂಗೋಲಿ ಬಗ್ಗೆ,ಜಾನಪದ ಕಲೆ ಬಗ್ಗೆ,ಹಾಗೂ ಇನ್ನಿತರ ವಿಚಾರದ ಬಗ್ಗೆ,ಹಾಗೂ,ಶ್ರೀಗಳವರ ವಿಶೇಷ ಪೂಜೆ ಪ್ರವಚನ ಇತ್ಯಾದಿ ನಡೆಯಲಿದೆ,
ಶ್ರೀ ಮಠದ ದಿವಾನರಾದ ಶ್ರೀ ಮುರಳೀಧರ ಆಚಾರ್ಯರು ಉಪಸ್ಥಿತರಿದ್ದರು.